ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರ ಸಹಕಾರದಿಂದ ಮೊದಲ ಹಂತದ ವ್ಯಾಕ್ಸಿನೇಶನ್ ಅಭಿಯಾನ ವಾರ್ಡ ನಂಬರ್ 63 ರಲ್ಲಿ ನಡೆಯಿತು.
ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಶೋಭಾ ಕಮತರ ಅವರ ನೇತೃತ್ವದಲ್ಲಿ ನಡೆದ ಲಸಿಕೆ ಅಭಿಯಾನದಲ್ಲಿ ಗುರುಸಿದ್ದೇಶ್ವರ ಕಾಲೋನಿಣ ಸಂತೋಷನಗರದ ಬೀದಿಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಚಿಂದಿ ಆಯುವವರು ಸೇರಿದಂತೆ ಮುಂತಾದ ಜನರಿಗೆ ಸುಮಾರು 168 ಜನರಿಗೆ ಕೋವಿಶೀಲ್ಡ್ ಲಸಿಕೆ (ಆನ್ಸೈಟ್ ಬಲ್ಕ್ ವ್ಯಾಕ್ಸಿನ್) ವಿತರಿಸಲಾಯಿತು. ಇನ್ನೂ ವಿವಿಧ ಹಂತಗಳಲ್ಲಿ ಲಸಿಕೆ ವಿತರಣೆ ಮಾಡುವ ಉದ್ದೇಶ ಹೊಂದಿದ್ದು, ವಿವಿಧ ಬಡಾವಣೆಯ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಶೋಭಾ ಕಮತರ ತಿಳಿಸಿದರು.
ಈ ಸಂದರ್ಭದಲ್ಲಿ ಮನೋಹರ ವಾಲಿ, ಶಕೀಲ್ ಅಮ್ಮದ ಮೋಸಳಿ, ಮಂಜು ಗೋಂದಕರ, ಯಲ್ಲಪ್ಪ ಸಗ್ಗೆನಹಳ್ಳಿ, ಡಾ. ಭಾರತಿ ರಾಥೋಡ ,ಪುಶ್ಪಾ ಒಳಗುಂದಿ,ಗಾಯತ್ರಿ ಪೋಳ,ಪ್ರಭಾ ಸುಂದಾಳ , ಸಿಸ್ಟರ್ಸ ಗಳಾದ ಶೃತಿ ಹಬೀಬ್, ನಬ್ರತಾ ಬಾಕಳೆ ,ನಾರಾಯಣ ಬಗಾಡೆ ಸೇರಿದಂತೆ ಮುಂತಾದವರು ಇದ್ದರು.