ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳ ರಾಜ್ಯ ಮಟ್ಟದ ವಧು-ವರರ ಬೃಹತ್ ಸಮಾವೇಶವನ್ನು ಇದೇ ದಿ. ೨೮ ರಂದು ನಗರದ ಮೂರುಸಾವಿರಮಠ ಶಾಲೆಯ ಆವರಣದ ಎಸ್.ಜೆ.ಎಂ.ವಿ ಸಂಘದ ಡಾ. ಮೂಜಗಂ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಧು-ವರರ ಸೂಚಕರಾದ ಹನುಮಂತಪ್ಪ ಎಚ್.ಎಸ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಸಮಾವೇಶವನ್ನು ಅಂದು ಮುಂಜಾನೆ 10 ರಿಂದ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಂಗಮ, ಪಂಚಮಸಾಲಿ, ಬಣಜಿಗ, ಆದಿ, ಸಾಧರು, ಶಿವಸಿಂಪಗಿ, ನೇಕಾರ, ಕುರುವಿನಶೆಟ್ಟಿ, ಹೂಗಾರ, ಲಿಂಗಾಯತ ರೆಡ್ಡಿ ಇತ್ಯಾದಿ ಸಮಾಜಗಳು ಈ ೨ ನೇ ರಾಜ್ಯಮಟ್ಟದ ವಧು-ವರರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಹನುಂಮತಪ್ಪ ಮೊಬೈಲ್ 72596 62822 ಗೆ ಸಂಪರ್ಕಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಶಂಕ್ರಪ್ಪ ಚಕ್ರಸಾಲಿ ಇದ್ದರು.