ಹುಬ್ಬಳ್ಳಿ : ಕಿಡ್ಸ್ ಲರ್ನಿಂಗ್ ಅಕಾಡ್ಯಮಿ ವತಿಯಿಂದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು ಶಿಬಿರದಲ್ಲಿ ಮಕ್ಕಳ್ಳು ಸಾಂಪ್ರದಾಯಿಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲೆಗಳನ್ನು ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು .
ವಾಣಿಶ್ರೀ ಮಠದ ಅವರ ನಡೆಸುತ್ತಿರುವ ಬೇಸಿಗೆ ಶಿಬಿರ ದಲ್ಲಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಹಾಕುವ ಮೂಲಕ ಮಹಾನ್ ಸಾಧಕರು ಹಾಗೂ ರಾಮ, ಲಕ್ಷ್ಮಣ, ಸೀತೆ ವೇಷವನ್ನು ತೊಟ್ಟು ನೃತ್ಯರೂಪಕ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹು-ಧಾ ಮಹಾನಗರ ಪಾಲಿಕೆ ಸದಸ್ಯರು ರೋಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ, ಕಾಂಗ್ರೆಸ್ ಮುಖಂಡ ಬಂಗಾರೇಶ ಹಿರೇಮಠ, ಹಾಗೂ ಸಿಬಿಎಲ್ ಹೆಗಡೆ , ಪಿಜಿ ಪವಾರ್, ಕಂದಕುರ್, ಬಸವರಾಜ ಮಠದ ಉಪಸ್ಥಿತರಿದ್ದರು.