ಹುಬ್ಬಳ್ಳಿ : ಹುಬ್ಬಳ್ಳಿ ಗಲಭೆ,ಇದೊಂದು ಪೂರ್ವ ನಿಯೋಜಿತ ಕೃತ್ಯ ಹಿಂದೂಗಳನ್ನು ಭಯಭೀತುಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹಳೇ ಹುಬ್ಬಳ್ಳಿಯ ಗಲಭೆಪೀಡಿತ ದಿಡ್ಡಿ ಹನುಮಂತ ದೇವಸ್ಥಟನ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು,
ಪೊಲೀಸರು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಗರದ ಎಲ್ಲಾ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಅಲ್ತಾಫ್ ಹಳ್ಳೂರು, ಅಲ್ತಾಫ್ ಕಿತ್ತೂರನ್ನು ಬಂಧಿಸಬೇಕು, ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಘಟನೆಗೆ ರಝಾ ಅಕಾಡೆಮಿ ಸಂಘಟನೆ ಕೈಜೋಡಿಸಿದೆ. ಸರ್ಕಾರ ಗಂಡಸ್ತನ ತೋರಿಸಬೇಕು.
ಕಠಿಣವಾದ ಕ್ರಮ ಜರುಗಿಸದಿದ್ದರೆ ಹಿಂದೂಗಳು ಸುಮ್ಮನೆ ಕೊಡುವುದಿಲ್ಲ. ದೇವಸ್ಥಾನದ ಮೇಲಿನ ದಾಳಿ
ಘಜ್ನಿ- ಘೋರಿ ಮನಸ್ಥಿತಿ ತೋರುತ್ತದೆ. ಗಲಭೆಗೆ ವಾಟ್ಸಪ್ ಸ್ಟೇಟಸ್ ಒಂದು ನೆಪ ಮಾತ್ರ.
ಮಸೀದಿ ಮೇಲೆ ಭಾಗ್ವದ್ವಜ ಹಾರಿಸಿದರೆ ಏನಾಗುತ್ತದೆ.
ಬೆಂಗಳೂರು ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೆ? ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮಾಡಿರುವ ಭಯ ಭೀತಿ ಇಲ್ಲಿ ಸೃಷ್ಟಿಸುವ ಹುನ್ನಾರ ಎಂದರು.
ಮಸೀದಿ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕು. ಮೇ ೯ 9ರವರೆಗೆ ಕೊನೆಯ ಗಡುವು ನೀಡುತ್ತೇವೆ. ಮೈಕ ತೆರವು ಮಾಡದಿದ್ದರೆ, ನಾವು ಹಿಂದೂ ದೇವಸ್ಥಾನಗಳ ಮೈಕ್ ಹಚ್ಚುತ್ತೇನೆ. ಬೆಳಿಗ್ಗೆ 5 ಗಂಟೆಗೆ ಓಂಕಾರ, ಭಜನೆ, ಸುಪ್ರಭಾತ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ.
ಬೆಳಗ್ಗೆ 5 ಗಂಟೆಯಿಂದಲೇ ಭಕ್ತಿಗೀತೆಗಳು ಮೊಳಗಲಿವೆ.
ಮಸೀದಿಗಳಿಗೆ ನೆಪ ಮಾತ್ರಕ್ಕೆ ನೊಟೀಸ್ ನೀಡಿದೆ.ಇದು ಕಣ್ಣೊರೆಸುವ ತಂತ್ರವಾಗಿ ಎಂದು ಸರ್ಕಾರದ ವಿರದ್ದ ವಾಗ್ದಾಳಿ ನಡೆಸಿದರು.