Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮತ ಕೇಳಲು ಬಂದ ಅಭ್ಯರ್ಥಿಗೆ ತರಾಟೆಗೆ ತೆಗೆದುಕೊಂಡ ಮತದಾರರು

ಮತ ಕೇಳಲು ಬಂದ ಅಭ್ಯರ್ಥಿಗೆ ತರಾಟೆಗೆ ತೆಗೆದುಕೊಂಡ ಮತದಾರರು

Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ ಇದರ ನಡುವೆ ಮತ ಕೇಳಲು ಬಂದ ಅಭ್ಯರ್ಥಿಗೆ ಸಾರ್ವಜನಿಕರ ಪರವಾಗಿ ನಿಖಿಲ್ ದಾಂಡೇಲಿ ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು….ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಮದ್ಯೆ ಚುನಾವಣೆ ಬಂದರೇ ಮಾತ್ರ ಜನರು ನೆನಪು ಆಗುತ್ತಾರೆ ಎಂದು ವಾರ್ಡ್ ನಂಬರ್ 50 ರ ಅಭ್ಯರ್ಥಿ ಮಂಗಳಮ್ಮಾ ಮೋಹನ ಹಿರೇಮನಿ ಅವರ ಪತಿ ಮೋಹನ ಹಿರೇಮನಿ ಅವರು ಮತ ಕೇಳಲು ಹೋದಾಗ, ಸಾರ್ವಜನಿಕರ ಪರವಾಗಿ ನಿಖಿಲ್ ದಾಂಡೇಲಿ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ, ಸ್ಯಾನಿಟೈಸರ್ ಮಾಡಸಿಲ್ಲ, ನೀವೂ ಎಂತಹ ಜನಸೇವಕರು,ಕೇವಲ ಚುನಾವಣೆ ಬಂದರೆ ಮಾತ್ರ ಬಡವರು ನೆನಪು ಆಗುತ್ತಾರೆ ನಿಮಗೆ ಯಾಕೇ ವೋಟ್ ಹಾಕಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ,ಇದೇ ಸಂದರ್ಭದಲ್ಲಿ ಮೋಹನ ಹಿರೇಮನಿ ಅವರ ಮಾತಿಗೆ ಉತ್ತರ ನೀಡದೇ ಮುಂದೆ ಪ್ರಚಾರಕ್ಕೆ ಹೋಗಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]