Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪಾಲಿಕೆ ಚುನಾವಣೆಯ 71 ನೇ ವಾರ್ಡಿನಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿ ನಜೀರ್ ಅಹ್ಮದ್ ಹೊನ್ಯಾಳ ಅವರಿಂದ ಬಿರುಸಿನ ಪ್ರಚಾರ

ಪಾಲಿಕೆ ಚುನಾವಣೆಯ 71 ನೇ ವಾರ್ಡಿನಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿ ನಜೀರ್ ಅಹ್ಮದ್ ಹೊನ್ಯಾಳ ಅವರಿಂದ ಬಿರುಸಿನ ಪ್ರಚಾರ

Spread the love

ಹುಬ್ಬಳ್ಳಿ: ಪಾಲಿಕೆ ಚುನಾವಣೆಯ 71 ನೇ ವಾರ್ಡಿನ ಎಐಎಂಐಎಂ ಹುರಿಯಾಳಾದ ನಜೀರ್ ಅಹ್ಮದ್ ಹೊನ್ಯಾಳ ಅವರಿಂದು ಪಡದಯ್ಯನ ಹಕ್ಕಲ, ಕೂಲಿಗಾರ ಪ್ಲಾಟ್, ಕುಮಾರ್ ಓಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ತಮ್ಮನ್ನು ಈ ಬಾರಿ ಆಯ್ಕೆ ಮಾಡುವಂತೆ ವಿನಂತಿಸಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ವಾರ್ಡಿನಲ್ಲಿನ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಎಂಐಎಂ ಪಕ್ಷಯೊಂದೆ ಪರ್ಯಾಯವಾಗಿದ್ದು, ವಾರ್ಡ್ ನಲ್ಲಿ ಬರುವ ರಸ್ತೆ, ಗಟಾರ್ ಸಹಿತ ಇತರ ಅಭಿವೃದ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಾರ್ಡಿನ ಸಮಗ್ರ ಅಭಿವೃದ್ಧಿಯ ಬಗೆಗೆ ತಮಗೆ ನನ್ನದೇ ಆದ ಕನಸುಗಳಿದ್ದು ಅದನ್ನು ನನಸು ಮಾಡಲು ಸದವಕಾಶವನ್ನು ನೀಡಬೇಕು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಗಾಳಿಪಟವನ್ನು ಹಾರಿಸಿದ್ದೆ ಆದ್ದಲ್ಲಿ ಹೊಸ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಈ ದಿಸೆಯಲ್ಲಿ ನಿಮ್ಮ ಮನೆ ಮಗನಿಗೆ ಆರ್ಶೀವದಿಸುವಂತೆ ವಿನಂತಿಸಿದರು‌.

 

 

ಮತಯಾಚನೆ ವೇಳೆ ಮುತ್ವಲಿ ಗೌಸ ಕರ್ನೂಲ್, ಮುಖಂಡರಾದ ಗೈಬುಸಾಬ ಹೊನ್ಯಾಳ, ಮುಸ್ತಾಕ್ ಕಲ್ಯಾಣಿ, ಸಲೀಂ ಬೆಂಗೇರಿ, ಗೌಸ ಜಂಗಾಪುರಿ, ಪಯಾಜ್ ಮಿಶ್ರಿಕೋಟಿ ಸೇರಿದಂತೆ ಮುಂತಾದವರು ಇದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]