ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಹೌದು.ಗ್ರಾಮದ ಮಾರುತಿ ನಗರದ ನಿವಾಸಿ ಕಾಳಪ್ಪ ಬಡಿಗೇರ್ ಎಂಬುವವರ ಮನೆಯೇ ಕಳತನವಾಗಿದ್ದು, ಇವರು ಕಳೆದು ಎರಡು ದಿನಗಳಿಂದ ಬಸವಣ್ಣನ ದೇವಸ್ಥಾನದಲ್ಲಿ ವಾಸವಿದ್ದರು ಇ ಎಲ್ಲಾ ವಿಚಾರ ತಿಳಿದು ಕೊಂಡ ಕಳ್ಳರು, ಈ ವೇಳೆ ಶನಿವಾರ ತಡರಾತ್ರಿ ಮನೆ ಬೀಗ ಒಡೆದು ಮನೆಗೆ ನುಗ್ಗಿದ ಚಾಲಾಕಿ ಕಳ್ಳರು ಮನೆಯಲ್ಲಿದ್ದ ಹಣ, ಆವರಣವನ್ನು ಕಳ್ಳತನ ಮಾಡಿದ್ದಾರೆ.ಇನ್ನು ಹಣ ಆಭರಣ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇನ್ನೂ ಅದೇ ನಗರದಲ್ಲಿರುವ ಮಾರುತಿ ಮಂದಿರಕ್ಕೆ ಕಣ್ಣ ಹಾಕಲು ಯತ್ನಿಸಿದ ಕಳ್ಳರ ಪ್ರಯತ್ನ ವಿಫಲವಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಬೇಟಿ ನೀಡಿದ ಗ್ರಾಮೀಣ ಠಾಣಾ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.