Home / Top News / ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದನೆ: ನಿಂದಿಸಿದ ವ್ಯಕ್ತಿ ವಿರುದ್ದ ಸ್ವತ ದೂರು ದಾಖಲಿಸಿದ ಡಿಸಿಪಿ

ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದನೆ: ನಿಂದಿಸಿದ ವ್ಯಕ್ತಿ ವಿರುದ್ದ ಸ್ವತ ದೂರು ದಾಖಲಿಸಿದ ಡಿಸಿಪಿ

Spread the love

ಹುಬ್ಬಳ್ಳಿ : ಮತಾಂತರಕ್ಕೆ ಯತ್ನಿಸಿದ ಆರೋಪಿಗಳ ಪರ ಡಿಸಿಪಿ ನಿಂತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದಿಸಿದ ವ್ಯಕ್ತಿ ವಿರುದ್ದ ಕೊನೆಗೂ ದೂರು ದಾಖಲಾಗಿದೆ.

ಹುಬ್ಬಳ್ಳಿಯ ಅಶೋಕ ಅಣ್ವೇಕರ್ ವಿರುದ್ದ ನವನಗರ ಠಾಣೆಯಲ್ಲಿ ಸ್ವತಃ ಡಿಸಿಪಿ ಕೆ ರಾಮರಾಜನ್ ದೂರು ದಾಖಲಿಸಿದ್ದಾರೆ.ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ,ಧರ್ಮ ನಿಂದನೆ, ಶಾಂತಿ ಭಂಗ್ ಕೇಸ್ ದಾಖಲಿಸಲಾಗಿದೆ.

ಮತಾಂತರ ವಿರೋಧಿಸಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ವಕೀಲ ಹಾಗೂ ಹಿಂದೂ ಸಂಘಟನರ ಮುಖಂಡ ಅಶೋಕ ಅಣ್ವೇಕರ ಡಿಸಿಪಿಯನ್ನ ಅವಾಚ್ಯ ಶಬ್ಧದಿಂದ ನಿಂದಿಸಿದ್ದರು. “ಹರಾಮ್ ಕೋರ್” ಡಿಸಿಪಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅದೇ ಸಂದರ್ಭದಲ್ಲಿ ಡಿಸಿಪಿ ‌ಕೂಡ ಅದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಅಶೋಕ ಅಣ್ವೇಕರ್ ಸೇರಿ ಪ್ರತಿಭಟನೆಯಲ್ಲಿ 100 ಜನ ಭಾಗಿಯಾಗಿದ್ದರು.
ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಯ 100 ಕಾರ್ಯಕರ್ತರ ವಿರುದ್ಧವೂ ದೂರು ದಾಖಲಾಗಿದೆ. IPS ಸೆಕ್ಷನ್ 504, 143, 147, 153, 295A, 298, 353 ಅಡಿ
ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]