ಹುಬ್ಬಳ್ಳಿ : ಗಾಂಜಾ ಒಂದರ ಪ್ರಕರಣವನ್ನು ಮುಚ್ಚಿಹಾಕಿದಲ್ಲದೇ, ವಶಪಡಿಸಿಕೊಂಡಿದ್ದ ಒಂದೂವರೆ ಕೆಜಿ ಗಾಂಜಾ ನಾಪತ್ತೆ ಮಾಡಿದ ಆರೋಪದ ಎಪಿಎಂಸಿ- ನವನಗರ ಪ್ರಕರಣದಲ್ಲಿ ಠಾಣೆಯ ಇನ್ಸ್ಪೆಕ್ಟರ್ ಸೇರಿ 7 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ.
ಎಪಿಎಂಸಿ – ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ , ಎಎಸ್ಐ ಕರಿಯಪ್ಪಗೌಡ ಕಾನ್ಸ್ಟೇಬಲ್ಗಳಾದ ವಿಕ್ರಮ ಪಾಟೀಲ , ನಾಗರಾಜ , ಶಿವರಾಜಕುಮಾರ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣಿಯ ಮಹಿಳಾ ಕಾನ್ಸ್ಟೇಬಲ್ ದಿಲ್ಯಾದ , ಹೊನ್ನಪ್ಪನವರ ಎಂಬುವರೇ ಅಮಾನತಾಗಿದ್ದು, ಗಾಂಜಾ ಮಾರಾಟಗಾರರ ಕುರಿತು ಸಾರ್ವಜನಿಕರೊಬ್ಬರು ಎಪಿಎಂಸಿ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದೂವರೆ ಕಿಲೋ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದೆ ಆರೋಪಿಗಳಿಂದ ಹಣ ಪಡೆದು ಕೈಬಿಟ್ಟಿದ್ದರು. ಆದರೆ ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ . ರಾಮರಾಜನ್ ಅವರಿಗೆ ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿಯವರು ಸಲ್ಲಿಸಿದ ವರದಿ ಆಧಾರದ ಮೇಲೆ ಆಯುಕ್ತರು ಇನ್ಸ್ಪೆಕ್ಟರ್ ಸೇರಿ 7 ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.