Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಬ್ಬಳ್ಳಿಯಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿದ ಭೀಮ ಜ್ಯುವೆಲರ್ಸ್

ಹುಬ್ಬಳ್ಳಿಯಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿದ ಭೀಮ ಜ್ಯುವೆಲರ್ಸ್

Spread the love

ಹುಬ್ಬಳ್ಳಿ : ಆಕರ್ಷಕ ಹಾಗೂ ಮನಮೋಹಕ ಚಿನ್ನಾಭರಣಗಳ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಭೀಮ ಜ್ಯುವೆಲರ್ಸ್, ಉತ್ತರ ಕರ್ನಾಟಕದ ಕೇಂದ್ರಸ್ಥಾನವಾಗಿರುವ ಹುಬ್ಬಳ್ಳಿ ನಗರದಲ್ಲಿ ತನ್ನ ಅತ್ಯಂತ ವಿಶಾಲವಾದ ಮಳಿಗೆ ಆರಂಭಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.

ರಿಟೇಲ್ ವಹಿವಾಟಿಗೆ ಮೀಸಲಾಗಿರುವ ೧೧,೫೦೦ ಚದರ ಅಡಿ ಪ್ರದೇಶ ಒಳಗೊಂಡಿರುವ ೩೦,೦೦೦ ಚದರ ಅಡಿಗಳಷ್ಟು ವಿಶಾಲವಾದ ಮನಸೆಳೆಯುವ ಈ ಮಳಿಗೆ, ಚಿನ್ನಾಭರಣಗಳ ಭವ್ಯ ಸಂಗ್ರಹದೊAದಿಗೆ ಹುಬ್ಬಳ್ಳಿ ಮತ್ತು ಗಡಿ ಭಾಗದ ಉತ್ತರ ಕರ್ನಾಟಕ ಪ್ರದೇಶದ ಚಿನ್ನಾಭರಣ ಪ್ರೇಮಿ ಗ್ರಾಹಕರ ಪಾಲಿಗೆ ಸ್ವರ್ಗವಾಗುವಂತಹ ಗುರಿ ಹೊಂದಿದೆ.

ಈ ಮಳಿಗೆ, ಅತ್ಯುತ್ಕೃಷ್ಟ ಚಿನ್ನಾಭರಣಗಳ ಭವ್ಯವಾದ ಸಂಗ್ರಹವನ್ನು ಒಳಗೊಂಡಿದೆ. ವಿದ್ಯಾನಗರದ ಹಳೆಯ ಪಿ.ಬಿ ರಸ್ತೆಯಲ್ಲಿರುವ ಈ ಮಳಿಗೆಯನ್ನು ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಅವರು ಉದ್ಘಾಟಿಸಿದರು. ಭೀಮ ಗೋಲ್ಡ್ನ ನಿರ್ದೇಶಕಿ ಸಾವಿತ್ರಿ ಕೃಷ್ಣನ್ ಅವರು, ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ವೀಣಾ ಚೇತನ ಬರದ್ವಾಡ ಅವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಸಮಾರಂಭ ನೆರವೇರಿಸಿದರು.

ಕರಕುಶಲತೆ ಮತ್ತು ಖಚಿತತೆ ಕುರಿತ ಬದ್ಧತೆಗೆ ಭೀಮ ಜ್ಯುವೆಲರ್ಸ್ ಹೆಸರುವಾಸಿಯಾಗಿದ್ದು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಚೈತನ್ಯದ ಸಂಕೇತವಾಗಿರುವ ಹುಬ್ಬಳ್ಳಿಯ ಆಕರ್ಷಣೆಗೆ ಹೊಸ ಕೊಡುಗೆ ನೀಡಲಿದೆ. ಆಭರಣ ಪ್ರೇಮಿಗಳ ಪಾಲಿಗೆ ಈ ಮಳಿಗೆ ಚಿನ್ನಾಭರಣಗಳ ಖಜಾನೆಯಾಗಿ ಕಾರ್ಯನಿರ್ವಹಿಸಲಿದೆ. ಆಭರಣಗಳ ಆಯ್ಕೆಗೆ ದೊಡ್ಡ ಶ್ರೇಣಿಯನ್ನೇ ಒದಗಿಸಲಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿನ್ನಾಭರಣ ವಿನ್ಯಾಸಗಳ ವೈವಿಧ್ಯಮಯ ಶ್ರೇಣಿಯೂ ಇಲ್ಲಿ ಇರಲಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಿಗೆ ಹೆಸರುವಾಸಿಯಾಗಿರುವ ಬ್ರ‍್ಯಾಂಡ್, ಸರಿಸಾಟಿಯಿಲ್ಲದ ವಿನ್ಯಾಸದ ನಾವೀನ್ಯತೆ, ಸೂಕ್ಷ್ಮ ಕುಶಲತೆ, ಅಮೂಲ್ಯವಾದ ಲೋಹಗಳು ಮತ್ತು ಹರಳುಗಳ ಮೋಡಿಮಾಡುವ ವಿಶಾಲ ಶ್ರೇಣಿಗೆ ಒಳ್ಳೆಯ ನಿದರ್ಶನವಾಗಿದೆ.

ಕುಶಲತೆಯಿಂದ ತಯಾರಿಸಲಾಗಿರುವ ಚಿನ್ನದ ಹಾರಗಳಿಂದ ಹಿಡಿದು ಬೆರಗುಗೊಳಿಸುವ ವಜ್ರದ ಆಭರಣಗಳು ಈ ಹೊಸ ಮಳಿಗೆಯಲ್ಲಿ ದೊರೆಯಲಿವೆ. ಸಾಂಪ್ರದಾಯಿಕ ವಧುವಿನ ಸೆಟ್‌ಗಳು, ಪರಂಪರೆಯ ದೇವಾಲಯ ಆಭರಣಗಳು (ಟೆಂಪಲ್ ಜ್ಯುವೆಲ್ಲರಿ) ಮತ್ತು ಪುರಾತನ ಆರಾಧನಾ ಸಂಗ್ರಹದಿAದ ಹಿಡಿದು ಕಾಸು ಮಾಲಾ ಮತ್ತು ಪೂತಲಿಯಂತಹ ಕಾಲಾತೀತ ಚಿನ್ನದ ಆಭರಣಗಳವರೆಗೆ, ಭೀಮ ಜ್ಯುವೆಲರ್ಸ್ ತಲೆಮಾರುಗಳನ್ನು ಮೀರಿದ ಆಭರಣಗಳ ವೈವಿಧ್ಯತೆಯನ್ನು ನೀಡುತ್ತದೆ. ಆಧುನಿಕ ಸೌಂದರ್ಯಶಾಸ್ತ್ರದ ಕಡೆಗೆ ಒಲವು ತೋರುವವರಿಗೆ, ‘ವೈ ಕಲೆಕ್ಷನ್’ ಮತ್ತು ಬೆಳ್ಳಿಯ ಸಂಗ್ರಹವು ಹಗುರ ಮತ್ತು ಪರಿಪೂರ್ಣವಾದ ದಿನನಿತ್ಯದ ಬಳಕೆಯ ಪರಿಕರಗಳನ್ನು ಒದಗಿಸುತ್ತದೆ. ಈ ಪ್ರತಿಯೊಂದೂ

ಆಭರಣವು ಆಧುನಿಕ ಯುಗದ ಉತ್ಸಾಹದೊಂದಿಗೆ ಸಂಪ್ರದಾಯ ಸಂಯೋಜಿಸುವ ಕಥೆಯನ್ನು ನಿರೂಪಿಸಲಿದೆ. ಬೆಳ್ಳಿಯ ಪರಿಕರಗಳು ಮತ್ತು ದುಬಾರಿ ಕೈಗಡಿಯಾರಗಳ ಬೆರಗುಗೊಳಿಸುವ ಆಯ್ಕೆಯೂ ಇಲ್ಲಿ ಇರಲಿದೆ. ಸಾಂಸ್ಕೃತಿಕ ಪರಂಪರೆ ಸಾಕಾರಗೊಳಿಸುವ, ಉತ್ತಮ ಕರಕುಶಲತೆಯ ಮತ್ತು ಕಾಲಾತೀತ ಅಲಂಕಾರದ ಜೊತೆ ಹುಬ್ಬಳ್ಳಿ ನಗರದಲ್ಲಿ ಭೀಮ ಜ್ಯುವೆಲರ್ಸ್ ಸಾಕ್ಷಿಯಾಗಿರಲಿದೆ.

ಹೊಸ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಅವರು, “ಹುಬ್ಬಳ್ಳಿಗೆ ಭೀಮ ಜ್ಯುವೆಲರ್ಸ್ನ ಹಿರಿಮೆ ಪರಿಚಯಿಸಲು ನಾವು ಪುಳಕಗೊಂಡಿದ್ದೇವೆ. ಈ ಮಳಿಗೆ ಇಡೀ ಉತ್ತರ ಕರ್ನಾಟಕ ಪ್ರದೇಶದಲ್ಲಿನ ಅತಿದೊಡ್ಡ ಆಭರಣ ಮಳಿಗೆಯಾಗಿದೆ. ನಮ್ಮ ಇತರ ಮಳಿಗೆಗಳಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ನಗರಗಳ ಗ್ರಾಹಕರಿಂದ ಅಪಾರ ಬೆಂಬಲವನ್ನು ನಾವು ನೋಡಿದ್ದೇವೆ. ಹುಬ್ಬಳ್ಳಿ ನಗರವು ರಾಜ್ಯದ ಅತ್ಯಂತ ಮಹತ್ವದ ನಗರ ಪ್ರದೇಶಗಳಲ್ಲಿ ಒಂದಾಗಿರುವುದರಿAದ, ನಮ್ಮ ವೈವಿಧ್ಯಮಯ ಶ್ರೇಣಿಯ ಆಭರಣಗಳನ್ನು ಈ ಭಾಗದ ಜನರಿಗೆ ಪ್ರದರ್ಶಿಸಲು ಈ ಮಳಿಗೆ ನಮಗೆ ಒಂದು ಅನನ್ಯ ಅವಕಾಶವನ್ನು ಒದಗಿಸಲಿದೆ. ದಕ್ಷಿಣ ಭಾರತದ ನಮ್ಮ ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಮೊಘಲ್-ಪ್ರೇರಿತ ಚಿನ್ನಾಭರಣಗಳ ಸಂಗ್ರಹಕ್ಕೆ ನಾವು ಇಲ್ಲಿ ಭಾರಿ ಬೇಡಿಕೆ ನಿರೀಕ್ಷಿಸುತ್ತೇವೆ. ಕೊಲ್ಹಾಪುರಿ ಶೈಲಿಗಳು ಮತ್ತು ಬೋರ್ಮಾಲಾ ಮತ್ತು ತೋಡಾಗಳಂತಹ ವಿಶಿಷ್ಟ ಚಿನ್ನಾಭರಣಗಳು ಹುಬ್ಬಳ್ಳಿಯ ಗ್ರಾಹಕರಿಗೆ ಹೆಚ್ಚು ಮೆಚ್ಚುಗೆಯಾಗುವುದು ನಮ್ಮ ಗಮನಕ್ಕೆ ಬಂದಿದೆ. ಹೆಚ್ಚು ಜಾಗರೂಕತೆಯಿಂದ ಸಂಗ್ರಹಿಸಲಾಗಿರುವ, ನಿಖರತೆ ಮತ್ತು ಶ್ರೇಷ್ಠತೆಯ ಬದ್ಧತೆಯೊಂದಿಗೆ ತಯಾರಿಸಲಾಗಿರುವ ಆಭರಣಗಳನ್ನು ಖರೀದಿಸಲು ಹುಬ್ಬಳ್ಳಿಯ ಎಲ್ಲಾ ನಿವಾಸಿಗಳಿಗೆ ನಾವು ಆತ್ಮೀಯ ಆಹ್ವಾನ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಮಳಿಗೆ ಉದ್ಘಾಟನಾ ಕೊಡುಗೆಗಳು
ಮಳಿಗೆ ಉದ್ಘಾಟನೆಯ ಸಂದರ್ಭದಲ್ಲಿ ಈ ಭಾಗದ ಗ್ರಾಹಕರಿಗೆ ಭೀಮ ಜ್ಯುವೆಲರ್ಸ್, ವಿಶೇಷ ಉದ್ಘಾಟನಾ ಕೊಡುಗೆಗಳನ್ನು ನೀಡಲಿದೆ. ೨೦೨೪ರ ಫೆಬ್ರವರಿ ೧ ರಿಂದ ೪ರವರೆಗೆ, ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಗ್ರಾಹಕರು ಮೇಕಿಂಗ್ ಶುಲ್ಕದಲ್ಲಿ ಶೇ ೭೦ ವರೆಗೂ ರಿಯಾಯ್ತಿ ಪಡೆಯಲಿದ್ದಾರೆ. ವಜ್ರಾಭರಣಗಳ ಖರೀದಿಯ ಮೇಲೆ ಗ್ರಾಹಕರು ಪ್ರತಿ ಕ್ಯಾರೆಟ್‌ಗೆ ರೂ ೭,೦೦೦ ನಗದು ಮರಳಿ (ಕ್ಯಾಷ್‌ಬ್ಯಾಕ್) ಪಡೆಯಲಿದ್ದಾರೆ. ಜೊತೆಗೆ ರೂ ೩ ಲಕ್ಷ ಮೌಲ್ಯದ ಪೂರಕ ಗಿಫ್ಟ್ ಕಾರ್ಡ್ ಇರಲಿದೆ. ಮಳಿಗೆ ಉದ್ಘಾಟನಾ ಸಂಭ್ರಮಾಚರಣೆಗೆ ಪೂರಕವಾಗಿ, ಹಳೆಯ ಚಿನ್ನಾಭರಣಗಳ ವಿನಿಮಯ ಕಾರ್ಯಕ್ರಮದ ಮೂಲಕ ಗ್ರಾಹಕರು ಪ್ರತಿ ಗ್ರಾಂ ಚಿನ್ನದ ದರದಲ್ಲಿ ರೂ ೧೦೦ ವರೆಗೆ ಹೆಚ್ಚುವರಿ ಲಾಭ ಪಡೆಯಬಹುದು. ಫೆಬ್ರವರಿ ೧ ರಿಂದ ೪ರ ವರೆಗೆ ಪ್ರತಿ ದಿನ ಪ್ರತಿ ಮೂರು ಘಂಟೆಗೊಮ್ಮೆ ವಿಶೇಷ ಲಕ್ಕಿ ಡ್ರಾ ಮೂಲಕ ಒಂದು ಹೋಂಡಾ ಆಕ್ಟಿವಾ ಗೆಲ್ಲುವ ಸುವರ್ಣ ಅವಕಾಶವೂ ಗ್ರಾಹಕರಿಗೆ ಇರಲಿದೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]