Home / Top News / UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಹಸೀನ್ ಭಾನು ದವಡಿ ಅವರಿಗೆ ಸರ್ವಧರ್ಮ ಗುರುಗಳಿಂದ ಸನ್ಮಾನ

UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಹಸೀನ್ ಭಾನು ದವಡಿ ಅವರಿಗೆ ಸರ್ವಧರ್ಮ ಗುರುಗಳಿಂದ ಸನ್ಮಾನ

Spread the love

ಹುಬ್ಬಳ್ಳಿ : UPSC ಪರೀಕ್ಷೆಯಲ್ಲಿ 482 ರ‍್ಯಾಂಕ್ ಗಳಿಸಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದ ತಹಸೀನ್ ಭಾನು ದವಡಿ ಅವರಿಗೆ ಕಾಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿಂದು ಹಿಂದೂ ಮುಸ್ಲಿಂ ಸರ್ವ ಧರ್ಮ ಗುರುಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಧರ್ಮ ಗುರುಗಳಾದ ಪೀರ್ ಸೈಯದ್ ಅಹ್ಮದ ರಜಾ UPSC ಪರೀಕ್ಷೆಯಲ್ಲಿ 482 ರ‍್ಯಾಂಕ್ ಗಳಿಸಿ ತಹಸೀನ್ ಭಾನು ದವಡಿ ಅವರು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ . ಭವಿಷ್ಯದಲ್ಲಿ ತಹಸೀನ್ ಭಾನು ದವಡಿ ಸಾಧನೆ ಮಾಡಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಹಾರೈಸಿದರು . ಸಮಾಜದಲ್ಲಿ ಉತ್ತಮ ಕೆಲಸ ಮಾಡಲೆಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಪೀರ್ ಸೈಯದ್ ನಿಸಾರ್ ಅಹ್ಮದ್ , ಡಾ. ಚಂದ್ರಶೇಖರ್ ಸ್ವಾಮೀಜಿ ಹೊಸಮಠ , ಹಾಗೂ ಇತರರು ಉಪಸ್ಥಿತರಿದ್ದರು.

About Santosh Naregal

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]