Home / Top News / UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಹಸೀನ್ ಭಾನು ದವಡಿ ಅವರಿಗೆ ಸರ್ವಧರ್ಮ ಗುರುಗಳಿಂದ ಸನ್ಮಾನ

UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಹಸೀನ್ ಭಾನು ದವಡಿ ಅವರಿಗೆ ಸರ್ವಧರ್ಮ ಗುರುಗಳಿಂದ ಸನ್ಮಾನ

Spread the love

ಹುಬ್ಬಳ್ಳಿ : UPSC ಪರೀಕ್ಷೆಯಲ್ಲಿ 482 ರ‍್ಯಾಂಕ್ ಗಳಿಸಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದ ತಹಸೀನ್ ಭಾನು ದವಡಿ ಅವರಿಗೆ ಕಾಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿಂದು ಹಿಂದೂ ಮುಸ್ಲಿಂ ಸರ್ವ ಧರ್ಮ ಗುರುಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಧರ್ಮ ಗುರುಗಳಾದ ಪೀರ್ ಸೈಯದ್ ಅಹ್ಮದ ರಜಾ UPSC ಪರೀಕ್ಷೆಯಲ್ಲಿ 482 ರ‍್ಯಾಂಕ್ ಗಳಿಸಿ ತಹಸೀನ್ ಭಾನು ದವಡಿ ಅವರು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ . ಭವಿಷ್ಯದಲ್ಲಿ ತಹಸೀನ್ ಭಾನು ದವಡಿ ಸಾಧನೆ ಮಾಡಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಹಾರೈಸಿದರು . ಸಮಾಜದಲ್ಲಿ ಉತ್ತಮ ಕೆಲಸ ಮಾಡಲೆಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಪೀರ್ ಸೈಯದ್ ನಿಸಾರ್ ಅಹ್ಮದ್ , ಡಾ. ಚಂದ್ರಶೇಖರ್ ಸ್ವಾಮೀಜಿ ಹೊಸಮಠ , ಹಾಗೂ ಇತರರು ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]