Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮೊಟ್ಟೆ ವಿತರಣೆ ಕೈಬಿಡದಿರಲು ಒತ್ತಾಯಿಸಿ ಪ್ರತಿಭಟನೆ

ಮೊಟ್ಟೆ ವಿತರಣೆ ಕೈಬಿಡದಿರಲು ಒತ್ತಾಯಿಸಿ ಪ್ರತಿಭಟನೆ

Spread the love

ಹುಬ್ಬಳ್ಳಿ : ಸಸ್ಯಾಹಾರಿ ಮತ್ತು ಯಾವುದೇ ಸ್ವಾಮೀಜಿಗಳ ಬೆದರಿಕೆಯ ಒತ್ತಡಕ್ಕೆ ಮಣಿಯದೇ ಅಪೌಷ್ಟಿಕತೆ ನಿರ್ಮೂಲನೆಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಮೊಟ್ಟೆ ಯೋಜನೆಯನ್ನು ವಾರಪೂರ್ತಿ ವಿಸ್ತರಿಸಿ ವಿತರಿಸುವಂತೆ ಆಗ್ರಹಿಸಿ ನಗರದ ತಹಶಿಲ್ದಾರ ಕಛೇರಿ ಬಳಿ ಸಮತಾ ಸೇನಾ ರಾಜ್ಯಾಧ್ಯಕ್ಷ ಹಾಗೂ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು, ವಿದ್ಯಾರ್ಥಿಗಳ ಪೌಷ್ಟಿಕತೆ ಆಹಾರ ನೀಡುವ ದೃಷ್ಟಿಯಿಂದಾಗಿ ಸರ್ಕಾರದ ಮೊಟ್ಟೆ ವಿತರಿಸುವ ಯೋಜನೆಯನ್ನು ಸ್ವಾಮಿಗಳು ಸೇರಿದಂತೆ ಯಾರು ಯಾರಿಗೂ ಮಣಿಯದೇ ಮುಂದುವರೆಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ. ಗುರುನಾಥ ಉಳ್ಳಿಕಾಶಿ, ಮೊಟ್ಟೆ ಬೇಡ ಎನ್ನುವರಿಗೆ ಬಾಳೆ ಹಣ್ಣು ಅಥವಾ ಇತರೆ ಯಾವುದೇ ಪೌಷ್ಟಿಕ ಆಹಾರ ನೀಡಿ ಆದರೇ‌ ಮೊಟ್ಟೆ ಸೇವಿಸುವವರಿಗೆ ಮೊಟ್ಟೆ ಅಗತ್ಯವಾಗಿ ನೀಡಿ ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಮೊಟ್ಟೆ ವಿತರಣೆಯನ್ನು ಕೈಬಿಟ್ಟಿದ್ದೇ ಆದರೇ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮೊಟ್ಟೆ ವಿರೋಧಿಸುವವರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ, ರೇವಣಸಿದ್ದಪ್ಪ ಹೊಸಮನಿ, ಮಲ್ಲಾಶೇಟ್,, ಕಿರಣ ಗಾಮನಗಟ್ಟಿ, ಫಕ್ಕಣ್ಣ ದೊಡ್ಡಮನಿ, ಶ್ರೀನಿವಾಸ ತೇರದಾಳ, ಲೋಹಿತ್ ಗಾಮನಗಟ್ಟಿ, ಮಹೇಶ ಧಾಬಡೆ,, ದೇವೇಂದ್ರಪ್ಪ ಇಟಗಿ, ರೈಸ್ ಖೌಝಿ, ಶಕೀಲ್ ಅಹ್ಮದ್ ಸೇರಿದಂತೆ ಉಪಸ್ಥಿತರಿದ್ದರು.

About Santosh Naregal

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]