Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಆಸ್ಪತ್ರೆಯಿಂದಲೇ ಹಾವು ರಕ್ಷಣೆಗೆ ಬಂದ ಸ್ನೇಕ್ ಸಂಗಮೇಶ

ಆಸ್ಪತ್ರೆಯಿಂದಲೇ ಹಾವು ರಕ್ಷಣೆಗೆ ಬಂದ ಸ್ನೇಕ್ ಸಂಗಮೇಶ

Spread the love

ಹುಬ್ಬಳ್ಳಿ: ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ನೇಕ್ ಸಂಗಮೇಶ ಆಸ್ಪತ್ರೆಯಿಂದಲೇ ನೇರವಾಗಿ ಆಗಮಿಸಿ ಹಾವು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು.. ಹುಬ್ಬಳ್ಳಿಯ ಲಕ್ಷ್ಮೀನಗರದ ಬಸವರಾಜ ಎಂಬುವವರ ಮನೆಯಲ್ಲಿ ಹಾವು ಬಂದಿದ್ದು, ಆತಂಕಗೊಂಡ ಮನೆಯವರು ಸ್ನೇಕ್ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಯಿಂದಲೇ ನೇರವಾಗಿ ಬಸವರಾಜ ಅವರ ಮನೆಗೆ ಆಗಮಿಸಿದ ಸ್ನೇಕ್ ಸಂಗಮೇಶ ಹಾವನ್ನು ರಕ್ಷಣೆ ಮಾಡುವ ಮೂಲಕ ಮನೆಯವರ ಆತಂಕ ದೂರ ಮಾಡಿದ್ದಾರೆ. ಅಲ್ಲದೇ ಹಾವನ್ನು ಕಾಡಿಗೆ ಬಿಡುವ ಮೂಲಕ ಅನಾರೋಗ್ಯದ ಸಂದರ್ಭದಲ್ಲಿ ಕೂಡ ಪ್ರಾಣಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

 

ಜಾಹಿರಾತು….

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]