Home / Top News / ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತ ಮತ್ತು ಕವಲಗೇರಿ ಗ್ರಾಮದಲ್ಲಿ ಕಂಡುಬಂದಿದ್ದ ಎರಡು ಚಿರತೆ ಒಂದೆ : ಬಂತು ಡಿಎನ್ಎ ವರದಿ: ಡಿಎಪ್ಓ ಯಶಪಾಲ ಕ್ಷೀರಸಾಗರ

ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತ ಮತ್ತು ಕವಲಗೇರಿ ಗ್ರಾಮದಲ್ಲಿ ಕಂಡುಬಂದಿದ್ದ ಎರಡು ಚಿರತೆ ಒಂದೆ : ಬಂತು ಡಿಎನ್ಎ ವರದಿ: ಡಿಎಪ್ಓ ಯಶಪಾಲ ಕ್ಷೀರಸಾಗರ

Spread the love

ಹುಬ್ಬಳ್ಳಿ ನೃಪತುಂಗಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮತ್ತು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಹಿಡಿಯಲಾಗಿದ್ದ ಚಿರತೆ ಒಂದೇ ಆಗಿದೆ ಎಂದು ಇಂದು ಬಂದಿರುವ ಡಿಎನ್ಎ ವರದಿಯಲ್ಲಿ ದೃಡಪಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಚಿರತೆ ಆರಂಭದಲ್ಲಿ ಹುಬ್ಬಳ್ಳಿ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಕಟ್ಟಡದಲ್ಲಿ ವಾಸವಾಗಿತ್ತು. ನಂತರ ಅದು ಬಹುಶಃ ಅಮರಗೋಳ, ಗೋವನಕೋಪ್ಪ ಮಾರ್ಗವಾಗಿ ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳಿಗೆ ಹೊಗಿರುವ ಕುರಿತು ಅಭಿಪ್ರಾಯ ಪಡಲಾಗಿತ್ತು.
ಅದರಂತೆ ಎರಡು ಚಿರತೆ ಒಂದೇ ಅಥವಾ ಬೇರೆ ಬೇರೆ ಎಂಬುದನ್ನು‌ ಖಾತ್ರಿಪಡಿಸಿಕೊಳ್ಳಲು ಎರಡುಕಡೆಯಲ್ಲಿ ಸಂಗ್ರಹಿಸಲಾಗಿದ್ದ ಚಿರತೆ
ಲದ್ದಿ (ಮಲ)ಯನ್ನು ಡಿಎನ್ಎ ಪರೀಕ್ಷೆಗಾಗಿ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಅದರ ವರದಿ ಇಂದು ಅರಣ್ಯ ಇಲಾಖೆಗೆ ತಲುಪಿದ್ದು, ಎರಡು ಕಡೆ ಕಂಡುಬಂದಿದ್ದ ಚಿರತೆ ಒಂದೆ ಆಗಿದೆ ಎಂದು ಡಿಎಪ್ಓ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]