ಹುಬ್ಬಳ್ಳಿ ; ನಗರದ ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ ನಗರದ ಲೋಹಿಯಾ ನಗರದ ಆದಿರಂಗ ಕಲಾ ಶಾಲೆಯಲ್ಲಿ ಆ.15 & ಆ.16 ರಂದು ಪ್ರಾಣೇಶ ಅವರಿಂದ ನಗು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ನಟ, ನಿರ್ದೇಶಕ ಹಾಗೂ ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಮುಖ್ಯಸ್ಥ ಯಶವಂತ ಸರದೇಶಪಾಂಡೆ ಹೇಳಿದರು.
ನಗರದ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ನಾಟಕ, ಸಂಗೀತ, ಹಾಗೂ ನೃತ್ಯ ತರಬೇತಿ ಜೊತೆಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪ್ರತಿಯೊಬ್ಬ ಮಕ್ಕಳಲ್ಲಿರುವ ಕಲೆ, ನೃತ್ಯ ಯೋಗ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ವಿವಿಧೆಡೆಯಿಂದ ನುರಿತ ಕಲಾವಿದರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿ ಹುಬ್ಬಳ್ಳಿ ರಂಗಕರ್ಮಿ ವಿಶ್ವನಾಥ ಕುಲಕರ್ಣಿ, ಪ್ರದೀಪ ಮುಧೋಳ, ಸಮೀರ ನಾಪಡೆ, ನಾರಾಯಣ ಪಾಂಡುರಂಗಿ ಸೇರಿದಂತೆ ಮುಂತಾದವರು ಇದ್ದರು.

Hubli News Latest Kannada News