Home / Uncategorized / ಕಳಸಾ ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ : ಯೋಜನೆ ಜಾರಿಗೆ ಸರ್ಕಾರ ಬದ್ದ: ಶಂಕರಪಾಟೀಲ್ ಮುನೇನಕೊಪ್ಪ

ಕಳಸಾ ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ : ಯೋಜನೆ ಜಾರಿಗೆ ಸರ್ಕಾರ ಬದ್ದ: ಶಂಕರಪಾಟೀಲ್ ಮುನೇನಕೊಪ್ಪ

Spread the love

ಹುಬ್ಬಳ್ಳಿ : ನೂತನ ಸಚಿವರಾದ ಮೇಲೆ ಸಿದ್ದಾರೂಢರ ಪುಣ್ಯ ಭೂಮಿ, ರೈತ ನೆಲಕ್ಕೆ ನಾನು ಬಂದಿದ್ದೇನೆ.
ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಸ್ಥಾನ ಕೊಟ್ಟಿದೆ ಎಂದು ನೂತನ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,
ಕೆಳಮಟ್ಟದಿಂದ ನಾನು ಹೋರಾಟದ ಮೂಲಕ ಬಂದಿದ್ದೇನೆ. ಹತ್ತು ಹಲವು ಕಾನೂನಾತ್ಮಕ ವಿಚಾರಗಳನ್ನ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ಕಳಸಾ ಬಂಡೂರಿ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡಿದ್ದೇವೆ.
ಹಿರಿಯ ನಾಯಕರಿಂದ ಹಿಡಿದು ನಾವೆಲ್ಲ ಭಾಗಿಯಾಗಿದ್ದಕ್ಕೆ ಈ ಸ್ಥಾನದಲ್ಲಿದ್ದೇವೆ ಎಂದರು.

ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಿಬ್ಯುನಲ್ ನಲ್ಲಿ 4 ಟಿಎಂಸಿ ಕುಡಿಯುವ ನೀರು ಕೊಡುವಂತೆ ಆದೇಶ ಆಗಿದೆ. ಸಣ್ಣ ಪುಟ್ಟ ತೊಡಕುಗಳನ್ನ ಬಗೆಹರಿಸಿ ಯೋಜನೆಯನ್ನ ಜಾರಿ ಮಾಡುತ್ತೇವೆ. ಗೊಂದಲಗಳು ಆಗಬಾರದು 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ.
ಕಳಸಾ ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ.‌ಮೂರು ರಾಜ್ಯಗಳ ಸಹಕಾರ ಈ ವಿಚಾರದಲ್ಲಿ ಬೇಕಾಗುತ್ತದೆ ಎಂದರು.

ಇನ್ನು ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳದ ಡ್ರೋನ್ ಸರ್ವೇ ಆಗಿದೆ. ಇನ್ನು 60 ದಿನಗಳಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ.
ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]