Home / Top News / ರಾಜ್ಯದಲ್ಲಿ ಹುಲಿ ಕೇಂದ್ರದಲ್ಲಿ ಇಲಿ ಸಂಸದರ ವಿರುದ್ಧ ಗರಂ ಆದ ಸಲೀಮ್ ಅಹ್ಮದ್

ರಾಜ್ಯದಲ್ಲಿ ಹುಲಿ ಕೇಂದ್ರದಲ್ಲಿ ಇಲಿ ಸಂಸದರ ವಿರುದ್ಧ ಗರಂ ಆದ ಸಲೀಮ್ ಅಹ್ಮದ್

Spread the love

ಹುಬ್ಬಳ್ಳಿ : ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಮುಖಂ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ,ಇನ್ನೂ ಹಲವು ನಾಯಕರು ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿಂದು ಮಾತಾನಾಡಿದ ಅವರು, ದಿ.ಮಾಜಿ ಸಿಎಮ್ ಅವರ ಪುತ್ರ ಮಧು ಬಂಗಾರಪ್ಪ ಅವರು ಪಕ್ಷದ ಆಡಳಿತ ನೀತಿ ಹಾಗೂ ಡಿಕೆಶಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲು ಇಂದಯ ಪಕ್ಷಕ್ಕೆ ಸೇರ್ಪಡೆಯಾದರು, ಇನ್ನು ನೆರೆಯಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ.ಆದ್ರೆ ಕೇಂದ್ರದಿಂದ ನೈಯಾಪೈಸೆ ಹಣ ಬಂದಿಲ್ಲ. ನಮ್ಮ ರಾಜ್ಯದ 25 ಜನ ಸಂಸದರು ಏನೂ ಮಾಡ್ತಾ ಇದ್ದಾರೆ.ಇಲ್ಲಿ ಹುಲಿಗಳಂತೆ ಘರ್ಜನೆ ಮಾಡ್ತಾರೆ,ಮೋದಿ ಮುಂದೆ ಹೋದ್ರೆ ಇವರೆಲ್ಲರೂ ಇಲಿಗಳಾಗ್ತಾರೆ,ಎಂದು ಬಿಜೆಪಿ ಸಂಸದರು ವಿರುದ್ಧ ಕಿಡಿ ಕಾರಿದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]