ಹುಬ್ಬಳ್ಳಿ : ಡಿ ಬಾಸ್ ಖ್ಯಾತಿಯ ನಟ ದರ್ಶನ್ ತೂಗುದೀಪ ಅವರ ಹುಬ್ಬಳ್ಳಿಯ ಅಪ್ಪಟ ಅಭಿಮಾನಿ ರಿಯಾಜ್ ಮೊಕಾಶಿ ಅಲಿಯಾಸ್ ರಿಯಾಜ್ ಚಿಂಗಾರಿ ಅವರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ .
ಚಿತ್ರದ ನಾಯಕನಾಗಿ ಸಂತೋಷ್ ಚಿಕ್ಕಣ್ಣವರ್ ಹಾಗೂ ನಾಯಕಿಯಾಗಿ ಶ್ರೀನಿಧಿ ಅಭಿನಯಿಸುತ್ತಿದ್ದಾರೆ . ಇನ್ನುಳಿದಂತೆ ಆಕಾಶ ಹರವಿ , ಮಂಜು ಪೂಜಾರಿ , ಅರುಣ್ ಕಿರಣ್ ಶ್ರುತಿ ಹಾಸನ್ ಮತ್ತು ನೇತ್ರ ಸುರೇಶ್ , ಭರತ್ ಅಲ್ತಾಫ್ ಉದ್ದನ್ನವರ್ , ರಚ್ಚ ಸಿಎಸ್ಟಿ , ಪ್ರೇಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಛಾಯಾಗ್ರಹಣವನ್ನು ಅರುಣ್ ಚಿಕ್ಕೂಸ್ ನಿರ್ವಹಿಸುತ್ತಿದ್ದಾರೆ . ಚಿತ್ರಕ್ಕೆ ಹುಬ್ಬಳ್ಳಿ ಪ್ರೊಡಕ್ಷನ್ ಬಂಡವಾಳ ಹೂಡಿದೆ . ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ .