ಹುಬ್ಬಳ್ಳಿ : ದೇಶದಲ್ಲಿ 2 ಕಂಪನಿಗಳು ಲಸಿಕೆ ಉತ್ಪಾದನೆ ಮಾಡುತ್ತಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೂರು ಕಂಪನಿಗಳು ವಾಕ್ಸಿನ್ ತಯಾರಿಸುವುದನ್ನು ಸ್ಥಗಿತಗೊಳಿಸಿದ್ದವು. ಒಂದು ದಿನದಲ್ಲೆ ಇಡೀ ದೇಶಕ್ಕೆ ಸರಬರಾಜು ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಏನು ಗೊತ್ತಿಲ್ಲ. ಅವರ ಆಡಳಿತ ಇದ್ದಾಗ ಮೂರು ವ್ಯಾಕ್ಸಿನ್ ಕಂಪನಿ ಸ್ಥಗಿತಗೊಂಡಿದ್ದವು ಎಂದರು.
ಅನ್ ಲಾಕ್ ನಂತರ ಜನಸಂದಣಿ ವಿಚಾರವಾಗಿ ಮಾತನಾಡಿದ ಅವರು, ಜನಸಂದಣಿ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಅಗತ್ಯ ನಿರ್ಬಂಧಗಳನ್ನು ವಿಧಿಸಬೇಕು. ಸರ್ಕಾರ ಎಲ್ಲರನ್ನೂ ತಡೆಯಲು ಆಗಲ್ಲ.
ಪ್ರತಿನಿತ್ಯ ಪೊಲೀಸರನ್ನು ಹಚ್ಚಿ ಜನರನ್ನು ನಿಯಂತ್ರಣ ಮಾಡಲು ಆಗಲ್ಲ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಆಗಬೇಕಿದೆ. ಲಸಿಕೆ ಯಾರಿಗೆ ಆಗಿಲ್ಲ ಅವರಿಗೆ ಗಡಿಭಾಗದಲ್ಲಿ ಚೆಕ್ ಮಾಡಬೇಕು ದೇಶದಲ್ಲಿ ಕೇರಳ, ಮಹಾರಾಷ್ಟ್ರ ದಿಂದ ಬರುವವರೆಗೂ ಕಡ್ಡಾಯವಾಗಿ ಚೆಕ್ ಅಪ್ ಮಾಡಬೇಕು. ಕೇರಳ,ಮಹಾರಾಷ್ಟ್ರದಲ್ಲಿ ಶೇಕಡಾ 60% ರಷ್ಟು ಕೇಸ್ ಗಳಿವೆ. ಅಲ್ಲಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು.
ನಾನು ಸಹ ಸರ್ಕಾರಕ್ಕೆ ಈ ವಿಚಾರವಾಗಿ ಸಲಹೆ ನೀಡಿರುವೆ ಎಂದು ಅವರು ಹೇಳಿದರು.