Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ : ನಳೀನಕುಮಾರ್ ಕಟೀಲ

ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ : ನಳೀನಕುಮಾರ್ ಕಟೀಲ

Spread the love

ಹುಬ್ಬಳ್ಳಿ : ಬಿ.ಎಸ್.ವೈ ಪರ ಸಹಿ ಸಂಗ್ರಹ ಮಾಡಿರುವಂತ ಯಾವುದೇ ಪ್ರಸಂಗಗಳು ಬಿಜೆಪಿಯಲ್ಲಿ ನಡೆದಿಲ್ಲ. ನಮ್ಮ ಪಾರ್ಟಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯ ಅಂತ ವಿಷಯಗಳಿಗೆ ಆಸ್ಪದವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಯಡಿಯೂರಪ್ಪ ಪರ ಸಹಿ ಬಗ್ಗೆ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಶಾಸನ ಬದ್ಧ ಪಾರ್ಟಿಯಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ ನಡೆದಿಲ್ಲ ಎಂದರು.

ರಾಷ್ಟ್ರೀಯ ನಾಯಕರು, ಹೈಕಮಾಂಡ ಏನ್ ಸೂಚಿಸುತ್ತದೆಯೋ ಅದನ್ನು ಪಾಲನೆ ಮಾಡುವ ಪಕ್ಷ.
ಅದನ್ನೆ ನಿನ್ನೆ ಸಿಎಂ ಚೆನ್ನಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನು ಹೇಳ್ತಾರೆ ಅದರ ಮೇಲೆ ನನ್ನ ಕೆಲಸ ಅಂದಿದ್ದಾರೆ. ಅದನ್ನು ಪಕ್ಷದ ಕಾರ್ಯಕರ್ತರು, ನಾಯಕರು, ಶಾಸಕರು ಅರ್ಥ ಮಾಡಿಕೊಳ್ಳಬೇಕು.
ಹೀಗಾಗಿ ಇಲ್ಲಿ ಸಹಿ ಸಂಗ್ರಹ ಅವಶ್ಯಕತೆ ಇಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರಾದರು ಇಂತಹ ಕೆಲಸಕ್ಕೆ ಮುಂದಾದರೇ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಶಾಸಕರು ಯಾರು ಅವರವರ ಕ್ಷೇತ್ರ ಬಿಟ್ಟು ತೆರಳಬಾರದು. ಕೊರೋನಾ ನಿಯಂತ್ರಣ ಕೆಲಸ ಮಾಡಬೇಕು. ಎಲ್ಲವನ್ನೂ ಪಾರ್ಟಿ ಗಮನಿಸುತ್ತಿದೆ.
ಇನ್ನುಮುಂದೆ ಅನಿವಾರ್ಯ ಇದ್ದರೆ ಬೆಂಗಳೂರಿಗೆ ಹೋಗಲಿ. ಜನ ನಮಗೆ ಆಶಿರ್ವಾದ ಮಾಡಿದ್ದು ಜನಸೇವೆ ಮಾಡುವುದಕ್ಕೆ. ನಮ್ಮ ಪಕ್ಷದಲ್ಲಿ ಸರ್ವ ಸಮ್ಮತಿಯ ನಾಯಕ ಬಿ.ಎಸ್.ಯಡಿಯೂರಪ್ಪ. ಹೀಗಾಗೇ ಯಾವುದೇ ಚರ್ಚೆಗಳಿಲ್ಲ, ಸಿಎಂ ಹುದ್ದೆ ಖಾಲಿ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]