ಹುಬ್ಬಳ್ಳಿ : ಕೊರೊನಾ ತಡೆಗಟ್ಟಲು ರಾಜ್ಯ ಸರಕಾರ ಸಂಪೂರ್ಣವಾಗಿ ಲಾಕ್ ಡೌನ್ ನ್ ಮಾಡಿದರು ಸಹ, ಸಾರ್ವಜನಿಕರು ಯಾವುದೇ ಭಯವಿಲ್ಲದೇ ಓಡಾಟ ನಡಸಿರುವ ಹಿನ್ನೆಲೆಯಲ್ಲಿ, ಹು-ಧಾ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು ಸ್ವತಃ ಫೀಲ್ಡಗಿಳಿದು ಬೈಕ್ ಹಾಗೂ ಕಾರ್ ಸಿಜ್ ಮಾಡಿ ಎಚ್ಚರಿಕೆ ನೀಡಿದರು.
ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೋಲಿಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ, ಆದ್ದರಿಂದ ಸಾರ್ವಜನಿಕರ ಆರೋಗ್ಯ ಕಾಪಾಡಲು ರಾಜ್ಯವನ್ನು ಸಂಪೂರ್ಣವಾಗಿ ಲಾಕ್ ಡೌನ್ ಜಾರಿ ಮಾಡಿ, ಯಾರು ಹೋರ ಬರದಂತೆ ಮನವಿ ಮಾಡಿದರು ಸಹ, ಸಾರ್ವಜನಿಕರು ವಿನಾಕಾರಣ ವಾಹನಗಳ ಓಡಾಟ ನಡೆಸಿದ್ದರು, ಸ್ವತಃ ನಗರ ಚನ್ನಮ್ಮ ವೃತ್ತದಲ್ಲಿ ಫೀಲ್ಡಿಗಿಳಿದು ವಾಹನ ತಪಾಸಣೆಗೆ ಮುಂದಾದ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಡಿಸಿಪಿ ಕೆ.ರಾಮರಾಜನ್ ಹೆಚ್ಚಿನ ವಾಹನ ಸಂಚಾರ ಅನಗತ್ಯ ಓಡಾಡುತ್ತಿದ್ದ ಸವಾರರ ತಪಾಸಣೆ ಮಾಡಿ ಹಲವಾರು ಬೈಕ್, ಕಾರ್ ಗಳನ್ನ ಸೀಜ್ ಮಾಡಿ ಎಚ್ಚರಿಕೆ ನೀಡಿದರು.